ಸ್ವಚ್ಛ ಭಾರತ ನಿರ್ಮಾಣಕ್ಕೆ ಎಲ್ಲರೂ ಕೈ ಜೋಡಿಸೋಣ :ನ್ಯಾಯಾಧೀಶ ಅಚ್ಚಪ್ಪ ದೊಡ್ಡಬಸವರಾಜ ಕರೆ.
ತಾಲೂಕಾ ಕಾನೂನು ಸೇವಾ ಸಮಿತಿ ಸಿಂಧನೂರು ಮಸ್ಕಿತಾಲೂಕಾ ನ್ಯಾಯವಾದಿಗಳ ಸಂಘ (ರಿ) ಇವರ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ಸ್ವಚ್ಛತಾ ದಿನಾಚರಣೆ ಹಾಗೂ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹುತಾತ್ಮರಾದವರ ಸ್ಮರಣಾರ್ಥ ಮೌನಾಚರಣೆ ಮಾಡಲಾಯಿತು.
ಇಂದು 'ರಾಷ್ಟ್ರೀಯ ಸ್ವಚ್ಛತಾ ದಿನ. ಮಹಾತ್ಮ ಗಾಂಧಿ ಕಂಡ ಸ್ವಚ್ಛ ಭಾರತದ ಕನಸು ನನಸು ಮಾಡಲು ಪ್ರತಿಯೊಬ್ಬ ಭಾರತೀಯನೂ ಮುಂದಾಗಬೇಕಿದೆ.
ಭಾರತದಲ್ಲಿ ಪ್ರತಿವರ್ಷ ಜನವರಿ 30 ರಂದು 'ರಾಷ್ಟ್ರೀಯ ಸ್ವಚ್ಛತಾ ದಿನ'ವನ್ನು ಆಚರಿಸಲಾಗುತ್ತದೆ. ಕೆಲಸದ ಸ್ಥಳ, ಮನೆಗಳು ಅಥವಾ ನಮ್ಮ ಸುತ್ತಮುತ್ತಲಿನ,ವಾತಾವರಣ, ಬಸ್ ನಿಲ್ದಾಣಗಳು, ಉದ್ಯಾನವನಗಳು ಇತರ ಸಾರ್ವಜನಿಕ ಸ್ಥಳಗಳಲ್ಲೂ ಸ್ವಚ್ಛತೆ ಕಾಪಾಡಲು ಉತ್ತೇಜಿಸಲು ಈ ದಿನವನ್ನು ಆಚರಿಸಲಾಗುತ್ತದೆ. ಸ್ವಚ್ಛತೆಯ ಮಹತ್ವದ ಕುರಿತು ಜಾಗೃತಿ ಮೂಡಿಸುವುದು ನೇಮ್ಲೇರ ಕರ್ತವ್ಯ ಎಂದು ಹೇಳಿದರು.
ಮೊದಲಿಗೆ ಮಸ್ಕಿ ಪಟ್ಟಣದ ಮಹಾತ್ಮ ಗಾಂಧಿಜೀ ಹಾಗೂ ಡಾಕ್ಟರ್ .ಬಿ .ಆರ್. ಅಂಬೇಡ್ಕರ್ ವೃತ್ತ ಹಳೆ ಪ್ರವಾಸಿಮಂದಿರದ ಹತ್ತಿರ ರಾಷ್ಟ್ರೀಯ ಸ್ವಚ್ಚತಾ ದಿನಾಚರಣೆ ನಿಮಿತ್ತ ನ್ಯಾಯಾಧೀಶ ಅಚ್ಚಪ್ಪ ದೊಡ್ಡಬಸವರಾಜ ಅವರು ಮಹನೀಯರ ಪುತಳಿಗೆ ನೀರಿನಿಂದ ತೊಳೆದು ಸ್ವಚ್ಛ ಗೊಳಿಸಿ ರಾಷ್ಟ್ರೀಯ ಸ್ವಚ್ಚತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಸ್ಕಿ ವಕೀಲ ಸಂಘದ ಅಧ್ಯಕ್ಷ ಈಶಪ್ಪ ದೇಸಾಯಿ, ಪಿಎಸ್ಐ ಮುದ್ದು ರಂಗಸ್ವಾಮಿ, ಮಸ್ಕಿ ನ್ಯಾಯವಾದಿಗಳ ಸಂಘ ಪದಾಧಿಕಾರಿಗಳ,ಹಾಗೂ ಪುರಸಭೆಯ ಪೌರಕಾರ್ಮಿಕರು ಸೇರಿದಂತೆ ಇತರರು ಉಪಸ್ಥಿತರಿದ್ದ
ರು.
What's Your Reaction?






