ದೇಶದ ಪ್ರಗತಿಗೆ ರೈತ ಬೆನ್ನೆಲುವಾದರೆ ಶಿಕ್ಷಕ ಅದರ ಮೆದುಳಿದಂತೆ :ಚನ್ನಬಸವರಾಜ್ ಮೆಟಿ
ಮಸ್ಕಿ ಶ್ರೀ ಧರ್ಮಸ್ಥಳ ಮಂಜುನಾಥ ಶಿಕ್ಷಣ ಹಾಗು ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ 14ನೇ ವರ್ಷದ ವಾರ್ಷಿಕೋತ್ಸವದ 2024-25ನೇ ಸಾಲಿನಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ 10ನೇ ತರಗತಿ ವಿದ್ಯಾರ್ಥಿಗಳಿಗೆ ಬಿಳ್ಕೊಡುಗೆ ಸಮಾರಂಭ.
ಮಸ್ಕಿ ಶ್ರೀ ಧರ್ಮಸ್ಥಳ ಮಂಜುನಾಥ ಶಿಕ್ಷಣ ಹಾಗು ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ 14ನೇ ವರ್ಷದ ವಾರ್ಷಿಕೋತ್ಸವದ 2024-25ನೇ ಸಾಲಿನಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ 10ನೇ ತರಗತಿ ವಿದ್ಯಾರ್ಥಿಗಳಿಗೆ ಬಿಳ್ಕೊಡುಗೆ ಸಮಾರಂಭ ನಡೆಯಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಚನ್ನಬಸವರಾಜ್ ಮೇಟಿ ಹಾಗೂ ಪಾಲಕರ ಪ್ರತಿನಿಧಿಗಳಾಗಿ ಡಾಕ್ಟರ್ ಮಲ್ಲಿಕಾರ್ಜುನ್ ದಂತವೈದ್ಯರು ಕಾರ್ಯಕ್ರಮಕ್ಕೆ ಮೇರಗು ತಂದರು.
ಕಾರ್ಯಕ್ರಮದಲ್ಲಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಕೂರಿತು ಮಕ್ಕಳಲ್ಲಿ ಪರೀಕ್ಷೆ ಎಂದರೆ ಭಯ ಬೇಡ ದೃಢಸಂಕಲ್ಪ ಆತ್ಮವಿಶ್ವಾಸ, ಧೈರ್ಯ ಇರಲಿ ಎಂದು ಚನ್ನಬಸವರಾಜ್ ಮೇಟಿ ಅವರು ಉದ್ದೇಶಿಸಿ ಮಾತನಾಡಿದರು.
ನಂತರ ಡಾಕ್ಟರ್ ಮಲ್ಲಿಕಾರ್ಜುನ್ ದಂತವೈದ್ಯರು ಪಾಲಕರ ಪ್ರತಿನಿಧಿಯಾಗಿ ಆಗಮಿಸಿ ಶಾಲೆಯ ಆಡಳಿತ ಮಂಡಳಿ ಹಾಗು ಶಾಲಾ ಶಿಕ್ಷಕರ ಶ್ರಮ ವಿದ್ಯಾರ್ಥಿಗಳ ಶಿಕ್ಷಣದ ಪ್ರಗತಿ ಬಗ್ಗೆ ಹಾಡಿ ಹೊಗಳಿದರು.
ಹಾಗೂ ಶಾಲಾ ಶಿಕ್ಷಣ ಸಂಸ್ಥೆ ಆಡಳಿತ ಮಂಡಳಿಯ ಅಧ್ಯಕ್ಷರು ಮಲ್ಲಿಕಾರ್ಜುನ್ ನಾಯಿನಗಲಿ, ಕಾರ್ಯದರ್ಶಿಗಳು ಚಂದ್ರಶೇಖರ್ ಹೂವಿನಬಾವಿ ಹಾಗು ಶ್ರೀಮತಿ ಇಂದಿರಾ ಅವರು 14 ವರ್ಷದ ಶೈಕ್ಷಣಿಕ ಪ್ರಗತಿ ಹಾಗೂ ವಿದ್ಯಾರ್ಥಿಗಳ ಶಿಕ್ಷಣ ಗುಣಮಟ್ಟ ಕಲೆ ಸಾಹಿತ್ಯ ಕೃಷಿ ವಿಜ್ಞಾನ ಸೇರಿದಂತೆ ಶಾಲಾ ಅಭಿವೃದ್ಧಿ ಮಂಡಳಿಯ ಕುರಿತು ಮಾತನಾಡಿದರು.
ನಂತರ ಗಣ್ಯರಿಗೆ ಸನ್ಮಾನ ಹಾಗು
ಸಾಧನೆಗೈದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪುರಸ್ಕಾರದ ನಂತರ ವಿದ್ಯಾರ್ಥಿಗಳ ಅನಿಸಿಕೆ ಸಾಂಸ್ಕೃತಿಕ ಕಾರ್ಯಕ್ರಮವು ಜರುಗಿತು.
ಈ ಕಾರ್ಯಕ್ರಮದಲ್ಲಿ SDM ಶಾಲೆಯ
ಸದಸ್ಯರು ಉಮಾ ಕಾಂತ್ ಹಳ್ಳಿ , ಶಿವು ಮಾಳ್ಗಿ, ಲಕ್ಷ್ಮಿಕಾಂತ್ ಪತ್ತಾರ್, ಮಂಜುನಾಥ್ ಅರವಿ, ಮಹೇಶ್ ನಂದಿಹಾಳ್, ವೀರೇಶ್ ಉದ್ಬಾಳ್, ಶಿವಕುಮಾರ್ ಮಾಳಗಿ, ಶ್ರೀಮತಿ ಸುಮತಿ ಮೇಟಿ , ರಾಜಶೇಖರ ಗೌಡ ಪೊಲೀಸ್ ಪಾಟೀಲ್ ಲಕ್ಷ್ಮಿಕಾಂತ್ ಪತ್ತಾರ್ , ಹಾಗೂ ಶಿಕ್ಷಕರಾದ
ಚನ್ನಬಸವ ಮುಖ್ಯ ಗುರುಗಳು, ಸಹ ಶಿಕ್ಷಕ, ಶಿಕ್ಷಕಿಯರು, ಸೇರಿದಂತೆ ಪಾಲಕರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
What's Your Reaction?






