ಮನೆ ಕಳ್ಳತನ ಬೆಳ್ಳಿ,ಬಂಗಾರ ನಗದು ಹಣ ಕಳವು
35 ಗ್ರಾಂ ಬಂಗಾರ, ಕಾಲು ಕಡಗ 100 ತೊಲೆ ಬೆಳ್ಳಿ ಆಭರಣಗಳು ಹಾಗು 150000 ನಗದು ಹಣ ಕಳುವು
ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ,ತೆಕ್ಕಲಕೋಟೆ ಪಟ್ಟಣದ 11ನೇ ವಾರ್ಡಿನ ನಿವಾಸಿ ದ್ಯಾವಣ್ಣ ಹಡ್ಲಿಗಿ
ಅವರ ಮನೆಯಲ್ಲಿ ಶನಿವಾರ ರಾತ್ರಿ ಕಳ್ಳತನ ನಡೆದಿದ್ದು, ಕಳ್ಳರು 35 ಗ್ರಾಂ ಬಂಗಾರ, ಕಾಲು ಕಡಗ 100 ತೊಲೆ ಬೆಳ್ಳಿ ಆಭರಣಗಳು ಹಾಗು 150000 ನಗದು ಹಣ ದೋಚಿಕೊಂಡು ಪರಾರಿಯಾಗಿರುವ ಘಟನೆ ಭಾನುವಾರ ಸವ ರಾತ್ರಿ ಬೆಳಗಿನ ಜಾವ ನಡೆದಿದೆ.
ದ್ಯಾವಣ್ಣ ಹಡ್ಲಿಗಿ ಕುಟುಂಬ ದವರು ರಾತ್ರಿ ಗದ್ದೆ ಗೇ ಹೋಗಿ ಬೆಳಗ್ಗೆ 6 ಗಂಟೆ ಸುಮಾರಿಗೆ ಬಂದು ನೋಡಿದ ಸಂದರ್ಭದಲ್ಲಿ ಕಳ್ಳರು ಮನೆಯ ಬಿಗ ಮೂರಿದು ಬಿದ್ದಿರುವುದು ವಸ್ತುಗಳು ಮನೆಯ ವಸ್ತುಗಳು ಚಲ್ಲಾಪಿಲ್ಲಿಯಾಗಿ ಬಿದ್ದಿರುವುದನ್ನು ಕಂಡು ತಕ್ಷಣವೇ ದ್ಯಾವಣ್ಣ ಅವರು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ತಕ್ಷಣವೇ ಘಟನಾ ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ, ಸಾಕ್ಷ್ಯ ಸಂಗ್ರಹಿಸಿ ಕಳ್ಳತನದಲ್ಲಿ ಭಾಗಿಯಾದವರ ಪತ್ತೆಗೆ ತನಿಖೆ ಆರಂಭಿಸಲಾಗಿದೆ ಸ್ಥಳೀಯ ಮೂಲಗಳಿಂದ ತಿಳಿದುಬಂದಿದೆ.
What's Your Reaction?



