ಸಿಂಧನೂರಿನ ಸುಕಾಲಪೇಟೆಯಲ್ಲಿ ಐದು ಜನರ ಕೊಲೆ ಪ್ರಕರಣ 3ಜನರಿಗೆ ಮರಣದಂಡನೆ ಶಿಕ್ಷೆ 9 ಜನರಿಗೆ ಜೀವಾವಧಿ ಶಿಕ್ಷೆ ದಂಡ  ವಿಧಿಸಿ ಮಹತ್ವದ ತೀರ್ಪು ನೀಡಿದ ರಾಯಚೂರು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಬಿ.ಬಿ.ಜಕಾತಿ

ತನಿಖೆ ಕೈಗೊಂಡ ತನಿಖಾಧಿಕಾರಿ ಸರ್ಕಲ್ ಇನ್ಸ್‌ಪೆಕ್ಟ‌ರ್ ಬಾಲ ಚಂದ್ರ ಲಕ್ಕಂ  ದೋಷಾರೋಪಣ ಸಲ್ಲಿಸಿದ್ದರು ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಆರ್. ಎ.ಗಡಕರಿ ವಾದ ಮಂಡಿಸಿದ್ದರು. ಪೊಲೀಸ್ ಕಾನ್‌ಸ್ಟೇಬಲ್ ಗಳಾದ ಕೆಂಚಮ್ಮ ಹಾಗೂ ಬೂದೆಪ್ಪ ಸಾಕ್ಷಿದಾರರನ್ನು ಸೂಕ್ತ ಸಮಯದಲ್ಲಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದ ಪೊಲೀಸ್ ಸಿಬ್ಬಂದಿ ಹಾಗೂ ಅಭಿಯೋಜಕ ಆರ್. ಎ.ಗಡಕರಿ   ಕಾರ್ಯವೈಖರಿ ಶ್ಲಾಘನೀಯ ಎಂದು ಎಸ್.ಪಿ.ಪುಟ್ಟಮಾದಯ್ಯ  ತಿಳಿಸಿದರು

Apr 9, 2025 - 11:28
Apr 9, 2025 - 11:31
 0  55
ಸಿಂಧನೂರಿನ ಸುಕಾಲಪೇಟೆಯಲ್ಲಿ ಐದು ಜನರ ಕೊಲೆ ಪ್ರಕರಣ 3ಜನರಿಗೆ ಮರಣದಂಡನೆ ಶಿಕ್ಷೆ  9 ಜನರಿಗೆ ಜೀವಾವಧಿ ಶಿಕ್ಷೆ ದಂಡ  ವಿಧಿಸಿ ಮಹತ್ವದ ತೀರ್ಪು ನೀಡಿದ ರಾಯಚೂರು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಬಿ.ಬಿ.ಜಕಾತಿ

ಸಿಂಧನೂರು ನಗರದ ಸುಕಾಲಪೇಟೆಯಲ್ಲಿ ಜುಲೈ 11, 2020 ರಂದು ಐದು ಜನರನ್ನು ಬರ್ಬರವಾಗಿ ಕೊಲೆ ಮಾಡಿದ ಹಾಗೂ ಇಬ್ಬರ ಕೊಲೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ವಾದ-ವಿ ವಾದಗಳನ್ನು ಆಲಿಸಿದ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಬಿ.ಬಿ.ಜಕಾತಿ ಅವರು ಸಾಕ್ಷಾಧಾರಗಳನ್ನು ಪರಾಮರ್ಶಿಸಿ ಮಂಗಳವಾರ 1 ರಿಂದ 3ನೇ ಆರೋಪಿತರಿಗೆ ಮರಣ ದಂಡನೆ ಹಾಗೂ ತಲಾ ರೂ.47,000 ದಂಡ ಹಾಗೂ 4 ರಿಂದ 12ನೇ ಆರೋಪಿತರಿಗೆ ಜೀವಾವಧಿ ಕಾರಾಗೃಹ ಶಿಕ್ಷೆ ಹಾಗೂ ತಲಾ ರೂ.97,500 ದಂಡ ವಿಧಿಸಿ ತೀರ್ಪ ನೀಡಿದ್ದಾರೆ.

ಶಿಕ್ಷೆಗೊಳಗಾದವರು: ಸಣ್ಣ ಫಕೀರಪ್ಪ ಸೋಮಪ್ಪ ಕೋಣದ,ಅಮ್ಮಣ್ಣ  ಅಂಬಣ್ಣ ಸೋಮಪ್ಪ ಕೋಣದ, ಸೋಮಶೇಖ‌ರ್ ಹಿರೇಫಕೀರಪ್ಪ  ದೊಡ್ಡ ಫಕೀರಪ್ಪ ಕೋಣದ, ರೇಖಾ  ಸಿದ್ದಮ್ಮ ಸಣ್ಣ ಫಕೀರಪ್ಪ ಕೋಣದ, ಗಂಗಮ್ಮ ಅಂಬಣ್ಣ ಹೆಬ್ಬಾ ಳ, ದೊಡ್ಡ ಫಕೀರಪ್ಪ ಸೋಮಪ್ಪ ಕೋಣದ ಹನುಮಂತ ಸೋಮಪ್ಪ ಕೋಣದ, ಹೊನ್ನೂರಪ್ಪ ಸೋಮಪ್ಪ ಕೋಣದ, ಬಸಲಿಂಗಪ್ಪ ದೊಡ್ಡ ಫಕೀರಪ್ಪ ಕೋಣದ, ಅಮರೇಶ್ ಮಲ್ಲ ಪ್ಪ, ಶಿವರಾಜ ಅಂಬಣ್ಣ ಹೆಬ್ಬಾಳ, ಪರಸಪ್ಪ ಜಂಬುಲಿಂಗಪ್ಪ ಸಿದ್ದಾಪುರ ಅವರೆಲ್ಲ ನ್ಯಾಯಾಲಯದಿಂದ ಶಿಕ್ಷೆಗೊಳಗಾದವರು.

ಏನಿದು ಪ್ರಕರಣ?: ನಗರದ ಸುಕಾಲಪೇಟೆಯ ಈರಪ್ಪ ಕೋಣದ್ ಅವರ ಪುತ್ರ ಮೌನೇಶ, ಅದೇ ಓಣಿಯ ಸಣ್ಣ ಫಕೀರ ಪ್ಪನ ಪುತ್ರಿ ಮಂಜುಳಾ ಎರಡು ಮನೆಗಳವರ ತೀವ್ರ ವಿರೋ ಧದ ಮಧ್ಯೆ ವಿವಾಹವಾಗಿದ್ದರು. ವಿವಾಹದ ನಂತರ ಎರಡು ಕುಟುಂಬಗಳ ಮಧ್ಯೆ ಪ್ರತಿನಿತ್ಯ ವಾಗ್ವಾದ, ಜಗಳ ಸಾಮಾನ್ಯ ವಾಗಿತ್ತು. ಜುಲೈ 11, 2020 ರಂದು ಸಂಜೆ ದೊಡ್ಡ ಫಕೀರಪ್ಪ ಕೋಣದ್ ಸೇರಿದಂತೆ ಅವರ ಸಹೋದರರಾದ ಸಣ್ಣ ಫಕೀ ರಪ್ಪ, ಅಂಬಣ್ಣ, ಸೋಮಶೇಖರ ಮತ್ತಿತರರು ಕೊಡಲಿ, ಮ ಚ್ಚು, ಬಡಿಗೆ ಸೇರಿದಂತೆ ಮಾರಕಾಸ್ತ್ರಗಳಿಂದ ಈರಪ್ಪ ಕೋಣದ್

ಮನೆಗೆ ನುಗ್ಗಿ ಎಲ್ಲರನ್ನೂ ಅಟ್ಟಾಡಿಸಿ ದಾಳಿ ಮಾಡಿದ್ದರು. ಈ ಘಟನೆಯಲ್ಲಿ ಐವರು ಕೊಲೆಗೀಡಾಗಿ, ಇಬ್ಬರ ಮೇಲೆ ಮಾರ ಣಾಂತಿಕ ಹಲ್ಲೆಯಾಗಿತ್ತು.

ದಾಳಿಯ ಮುನ್ಸೂಚನೆ ಅರಿತಿದ್ದ, ಪ್ರೇಮಿಸಿ ವಿವಾಹವಾಗಿದ್ದ ಮೌನೇಶ ಮತ್ತು ಮಂಜುಳಾ ಶಹರ ಪೊಲೀಸ್‌ ಠಾಣೆಗೆ ತೆರಳಿ ಆಶ್ರಯ ಪಡೆದಿದ್ದರು.

ಬೆಚ್ಚಿ ಬೀಳಿಸಿದ್ದ ಕೊಲೆ ಘಟನೆ: ಸುಕಾಲಪೇಟೆಯಲ್ಲಿ ಕುಟುಂ

ಬವೊಂದರ ಮೇಲೆ ಆರೋಪಿತರು ಮಾರಕಾಸ್ತ್ರಗಳಿಂದ ದಾಳಿ

ನಡೆಸಿ ಹಲವರನ್ನು ಕೊಚ್ಚಿ ಹಾಕಿದ ಪೈಶಾಚಿಕ ಘಟನೆ ಇಡೀ ನಗರಕ್ಕೆ ಅಂದು ಕಾಳಿಚ್ಚಿನಂತೆ ಹಬ್ಬಿ ಸಾರ್ವಜನಿಕರನ್ನು ಬೆಚ್ಚಿ ಬೀಳಿಸಿದ್ದಲ್ಲದೇ ಇಡೀ ರಾಜ್ಯದ ಗಮನ ಸೆಳೆದಿತ್ತು.

ಸಿಂಧನೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿತರ ವಿರುದ್ದ ಅಂದಿನ ತನಿಖಾಧಿಕಾರಿ ಸರ್ಕಲ್ ಇನ್ಸ್‌ಪೆಕ್ಟ‌ರ್ ಬಾಲ ಚಂದ್ರ ಲಕ್ಕಂ ತನಿಖೆ ಕೈಗೊಂಡು ದೋಷಾರೋಪಣ ಸಲ್ಲಿಸಿದ್ದರು. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಆರ್. ಎ.ಗಡಕರಿ ವಾದ ಮಂಡಿಸಿದ್ದರು.

ಪೊಲೀಸ್ ಕಾನ್‌ಸ್ಟೇಬಲ್ ಗಳಾದ ಕೆಂಚಮ್ಮ ಹಾಗೂ ಬೂದೆಪ್ಪ ಸಾಕ್ಷಿದಾರರನ್ನು ಸೂಕ್ತ ಸಮಯದಲ್ಲಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು.

ನಡೆದ ಬರ್ಬರ ಕೊಲೆ ದುಷ್ಕೃತ್ಯಕ್ಕೆ ಸಂಬಂಧಿಸಿದಂತೆ ಶಹರ ಪೊಲೀಸ್ ಠಾಣೆ ಯಲ್ಲಿ  143, 147, 148, 120, 504, 448, 427, 307, 302, 114  ಹಾಗೂ 149  ರಡಿ ದಾಖಲಿಸಿ ತನಿಖೆಗೆ ತನಿಖೆ ಕೈಗೊಂಡಿದ್ದರು.

What's Your Reaction?

like

dislike

love

funny

angry

sad

wow