ನಿವೇಶನ ವಂಚಿತ ಫಲಾನುಭವಿಗಳಿಗೆ ನಿವೇಶನ ನೀಡಬೇಕೆಂದು ಆಗ್ರಹಿಸಿ ಶಾಸಕರಿಗೆ ಮನವಿ
ಮಸ್ಕಿ 23 ಮಂಗಳವಾರ ಅಶೋಕ ವೃತ್ತದಲ್ಲಿ ದಲಿತ ಸಂಘರ್ಷ ಸಮಿತಿ ದಾದಾ ಸಾಹೇಬ್ ಡಾ ಎನ್.ಮೂರ್ತಿ ಸ್ಥಾಪಿತ ಸಂಘಟನೆಯು ಹಕ್ಕು ಪತ್ರ ವಿತರಿಸಿ ಎಂದು 22 ವರ್ಷಗಳ ಕಾಲ ನಿವೇಶನ ವಂಚಿತ ಫಲಾನುಭವಿಗಳಿಗೆ ನಿವೇಶನ ನೀಡಬೇಕೆಂದು ಶಾಸಕ ಆರ್ ಬಸನಗೌಡ ತುರುವಿಹಾಳ ಅವರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಶಾಸಕರು ಮನವಿ ಸ್ವೀಕರಿಸಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿ ಮಾತನಾಡಿದ ಅವರು 22 ವರ್ಷಗಳ ಕಾಲ ನಿವೇಶನ ವಂಚಿತ ಫಲಾನುಭವಿಗಳಿಗೆ ಪಕ್ಕ ನಿವೇಶನ ನೀಡಲು ಸರ್ವೆ ನಂ 32 ರಲ್ಲಿ 6 ಎಕರೆ ಜಮೀನಿನಲ್ಲಿ ನಿವೇಶಗಳನ್ನು ನಿರ್ಮಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದ್ದು ನಿರಂತರ ಮಳೆಯಾಗುತ್ತಿರುವುದರಿಂದ ಅಧಿಕಾರಿಗಳ ಸರ್ವೆ ಕಾರ್ಯದಲ್ಲಿ ಅಡಚಣೆ ಉಂಟಾಗಿದೆ ಅಧಿಕಾರಿಗಳಿಂದ ಸಂಪೂರ್ಣ ಮಾಹಿತಿ ಪಡೆದುಕೊಂಡು ಹಕ್ಕು ಪತ್ರ ಇರುವ ಎಲ್ಲರಿಗೂ ನಿವೇಶನಗಳನ್ನು ಹಂಚಿ ಉಳಿದ ನಿವೇಶನಗಳಲ್ಲಿ ಅರಹ ಫಲಾನುಭವಿಗಳಿಗೆ ನಿವೇಶನ ನೀಡಲಾಗುವುದು ಎಂದು ಹೇಳಿದರು.
ಲಿಂಗಸುಗೂರು 150ಎ ಮುಖ್ಯ ರಸ್ತೆ ಪಕ್ಕದ ಸರ್ವೆ ನಂ 32 ರಲ್ಲಿ 6 ಎಕರೆ ಜಮೀನಿನಲ್ಲಿ 2003-2004 ನೇ ಸಾಲಿನಲ್ಲಿ 151 ಫಲಾನುಭವಿಗಳಿಗೆ ಹಕ್ಕು ಪತ್ರ ನೀಡಿ, ಪಟ್ಟಣ ಪಂಚಾಯತ ಸಂದರ್ಭದಲ್ಲಿ ನಿವೇಶನ ಸಹಿತ 151 ಮನೆಗಳ ಪೈಕಿ 2001-2002 ನೇ ಸಾಲಿನ ನವಗ್ರಾಮ ಯೋಜನೆಯಲ್ಲಿ 50 ಮತ್ತು ಎ.ಸಿ.ಎ ಯೋಜನೆಯಲ್ಲಿ 100 ಮನೆಗಳು ಮಂಜುರಾಗಿದ್ದವು, ಆಶ್ರಯ ಯೋಜನೆಯಡಿಯಲ್ಲಿ ಮನೆಗಳನ್ನು ಅವೈಜ್ಞಾನಿಕ ಕಳಪೆ ಗುಣಮಟ್ಟದ ಮೂಲಭೂತ ಸೌಕರ್ಯಗಳಿಲ್ಲದೆ ನಿರ್ಮಾಣವಾದ ನಿವೇಶನ ವಾಸಕ್ಕೆ ಯೋಗ್ಯವಿಲ್ಲದಂತಾಗಿ ಪಾಳು ಬಿದ್ದ ಮನೆಗಳಲ್ಲಿ ಅನುಮಾನಸ್ಪದಸಾವು' ಅನೈತಿಕ ಚಟುವಟಿಕೆಗಳ ತಾಣವಾಗಿ, ನಿರ್ಮಾಣವಾಗಿದ್ದವು. ಅಂದು ಲೋಕೋಪಯೋಗಿ ಇಲಾಖೆ, ಸಹಾಯಕ ಆಯುಕ್ತರ ಧೃಡೀಕರಣ ಪಡೆದು ಸದರಿ ಮನೆಗಳನ್ನು ಪುರಸಭೆ ವತಿಯಿಂದ ನೆಲಸಮಮಾಡಲಾಯಿತ್ತು.ಆದರೇ ಜಮೀನನ್ನು ಅಕ್ಕ-ಪಕ್ಕ ಇರುವ ಜಮೀನು ಮಾಲೀಕರು ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದು ಅದನ್ನು ತೆರವುಗೊಳಿಸಿ ಮೂಲಭೂತ ಸೌಕರ್ಯಗಳನ್ನು ಒದಗಿಸ ಬೇಕು ಎಂದು ನಿವೇಶನ ವಂಚಿತ ಫಲಾನುಭವಿಗಳು ಶಾಸಕರಿಗೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಲ್ಲಿಕ್ ಮುರಾರಿ, ನಾಗಭೂಷಣ ಬಾರಿಕೇರ, ಖಲೀಲ್ ಶೇಡ್ಮಿ, ಮಲ್ಲಯ್ಯ ಮುರಾರಿ,ರವಿಮಡಿವಾಳ, ಮರಿಸ್ವಾಮಿ ಹಸಮಕಲ್ ಸೇರಿದಂತೆ ಫಲಾನುಭವಿಗಳು ಸೇರಿದಂತೆ ಸಂಘಟನೆಯ ಪದಾಧಿಕಾರಿಗಳು ಇದ್ದರು.
What's Your Reaction?



